ಅಂಬರೀಶಕ್ಕೆ ಅಂಬರೀಶ್
Posted date: 09 Thu, Jan 2014 – 09:06:53 AM
ಸುಖಧರೆಪಿಕ್ಟರ‍್ಸ್ ಲಾಂಛನದಲ್ಲಿಖ್ಯಾತ ನಿರ್ದೇಶಕ ಕೆ.ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ, ಚಾಲೆಂಜಿಂಗ್ ಸ್ಟಾರ್‌ದರ್ಶನ್‌ಅಭಿನಯಿಸುತ್ತಿರುವ, ಅಂಬರೀಶ್ ಇದೀಗ ರೆಬೆಲ್‌ಸ್ಟಾರ್‌ಡಾ|| ಅಂಬರೀಶ್‌ಅವರಆಗಮನದೊಂದಿಗೆಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿದೆ.
ಅತ್ಯಂತಅದ್ದೂರಿ ವೆಚ್ಚದ ಈ ಚಿತ್ರದಲ್ಲಿಡಾ||ಅಂಬರೀಶ್, ಬೆಂಗಳೂರಿನ ನಿರ್ಮಾತೃಕೆಂಪೇಗೌಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೆಂಪೇಗೌಡರ ಸಾಹಸ ಸಾಧನೆಯನ್ನು ಸಾರುವಕೋಡುಗಲ್ಲ ನೆತ್ತಿ ಮೇಲೆ ಬಿಚ್ಚುಗತ್ತಿಯೋಧಾ ನಿಂತಾ ಎನ್ನುವ ಸುಂದರ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ನಗರದಅಬ್ಬಯ್ಯ ನಾಯ್ಡುಸ್ಟುಡಿಯೊದಲ್ಲಿ ಹಾಡಲಾದ ಭವ್ಯವಾದದರ್ಬಾರ್ ಸೆಟ್‌ನಲ್ಲಿ ನಿರ್ದೇಶಕಕೆ.ಮಹೇಶ್ ಸುಖಧರೆ ಸೂಚನೆಯಂತೆ, ಭಾರತೀಯಚಿತ್ರರಂಗದಪ್ರಖ್ಯಾತ ನೃತ್ಯ ನಿರ್ದೇಶಕಚೆನ್ನಿ ಪ್ರಕಾಶ್ ಈ ಹಾಡನ್ನು ಚಿತ್ರಿಸಿದರು.ತೆಲುಗಿನಖ್ಯಾತ ನಟ ಸುಮನ್, ೨೦೦ ಜನ ನರ್ತಕ-ನರ್ತಕಿಯರು, ೫೦೦ ಸಹ ಕಲಾವಿದರು ಹಾಡಿನ ಸನ್ನಿವೇಶದಲ್ಲಿಡಾ|| ಅಂಬರೀಶ್‌ಅವರಿಗೆ ಸಹಭಾಗಿಗಳಾದರು. 

ಹಂಪೆಯಗತ ವೈಭವವನ್ನುಕಣ್ಣಿಗೆಕಟ್ಟುವಂತೆಕೃಪ್ಣದೇವರಾಯ ಮತ್ತುಕೆಂಪೇಗೌಡರ ಸ್ನೇಹವನ್ನು ಮನಮುಟ್ಟುವಂತೆ, ಕಟ್ಟಿಕೊಡುವ ನಿರ್ದೇಶಕರ ಪ್ರಯತ್ನಕ್ಕೆಖ್ಯಾತ ಸಂಗೀತ ನಿರ್ದೇಶಕವಿ. ಹರಿಕೃಷ್ಣ ಮತ್ತು ಸಾಹಿತಿ ನಾಗೇಂದ್ರಪ್ರಸಾದ್ ಕೈಜೊಡಿಸಿದ್ದಾರೆ.ಒಳಾಂಗಣವಲ್ಲದೆ ದೇವನಹಳ್ಳಿಯ ಸುತ್ತಮುತ್ತಲಿನ ಸುಂದರ ಹೊರಾಂಗಣದಲ್ಲಿಯೂ ಈ ಹಾಡಿನಚಿತ್ರೀಕರಣನಡೆಸಲಾಗಿದೆ.

ಡಾ||ಅಂಬರೀಶ್, ದರ್ಶನಜೊತೆಗೆ ಬಹುಭಾಷಾತಾರೆಪ್ರಿಯಾಮಣಿ, ಬುಲ್ ಬುಲ್‌ಖ್ಯಾತಿಯರಚಿತಾರಾಮ್, ಬಾಲಿವುಡ್‌ನಖ್ಯಾತ ಖಳ ನಾಯಕಕಲ್ಲಿದೋಜಿಣ, ತುಳಸಿ, ಶರತ್‌ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಿಮ್ಮೇಗೌಡ, ನೆ.ಲ.ನೆರೇಂದ್ರಬಾಬು, ಮೊದಲಾದಭರ್ಜರಿತಾರಾಗಣಚಿತ್ರದಲ್ಲಿದೆ, ತಂತ್ರಜ್ಞರಾಗಿ ಸತ್ಯ ನಾರಾಯಣ್‌ಛಾಯಾಗ್ರಹಣಚಿಂತನ್ ಸಂಭಾಷಣೆ, ಕೆ.ಎಂ ಪ್ರಕಾಶ್ ಸಂಕಲನ, ರವಿವರ್ಮಸಾಹಸ ಮತ್ತು ಅನಿಲ್ ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಒಟ್ಟಿನಲ್ಲಿ ಹಂತ ಹಂತದಲ್ಲೂಕೂತುಹಲ ಮೂಡಿಸುತ್ತಿರುವಅಂಬರೀಶರ ಮೂರನೇ ಹಂತದಚಿತ್ರೀಕರಣವು ಈಗ ನಗರದ ಸುತ್ತಮುತ್ತ ಭರದಿಂದ ಸಾಗಿದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed